ಸಾಹಿತ್ಯದ ತಾಯಿ ಬೇರು ತತ್ವ ಪದ : ಸಾಹಿತಿ ಬಿದಲೋಟಿ ರಂಗನಾಥ್
ಹಿಂದೂ ಧರ್ಮದಲ್ಲಿನ ಭಗವದ್ಗೀತೆ, ಮುಸಲ್ಮಾನರ ಕುರಾನ್ ಕ್ರಿಶ್ಚಿಯನ್ ರ ಬೈಬಲ್ಗಿಂತಲೂ ನಮಗೆ ಅಂಬೇಡ್ಕರ್ ರಚಿಸಿದ ಸಂವಿಧಾನ ಶ್ರೇಷ್ಠ ಎಂದು ಡಾಕ್ಟರ್ ಶ್ರೀ ಹನುಮಂತನಾಥ ಸ್ವಾಮೀಜಿ ತಿಳಿಸಿದರು ಅವರು ಬಿದಲೋಟಿ ಗ್ರಾಮದ ಶ್ರೀ ಆದಿಶಕ್ತಿ ಚಾಮುಂಡೇಶ್ವರಿ ದೇವಸ್ಥಾನದ ಆವರಣದಲ್ಲಿ ನಡೆದ ತತ್ವಪದ ಮೇಳ ಹಾಗೂ ಚಾಮುಂಡೇಶ್ವರಿ ದೇವಸ್ಥಾನದ 12ನೇ ವಾರ್ಷಿಕೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು. ನನಗೆ ದೀನದಲಿತರ ಬಡವರ ಅಭಿವೃದ್ಧಿ ಮುಖ್ಯ ಇಂತಹ ಮಠಗಳು ಬೆಳೆಯಬೇಕು,ನನ್ನ ಉಸಿರು ಇರುವವರೆಗೂ ಈ ಆದಿ ಜಾಂಬವ ಮಠಕ್ಕೆ ನನ್ನ ಬೇಂಬಲ ಹಾಗೂ ಸಹಕಾರ ಇರುತ್ತದೆ.ಸರ್ಕಾರವೂ ಮಠದತ್ತ ಗಮನಹರಿಸಬೇಕು ಹಾಗೂ ಆಧ್ಯಾತ್ಮಿಕ ಚಿಂತಕರನ್ನು ಬೆಂಬಲಿಸುವ ಮೂಲಕ ಸಹಕಾರ ನೀಡಬೇಕು ಹಾಗೂ ಗುರುವನ್ನು ಸ್ಮರಣೆ ಮಾಡುತ್ತಾ ಗುರುವಿನ ಮಾರ್ಗದರ್ಶನ ಪಾಲಿಸಿದ್ದೆ ಆದರೆ ಅವರಿಗೆ ಮೋಕ್ಷ ದೊರೆಯುತ್ತದೆ ಎಂದರು. ಕರ್ನಾಟಕದಲ್ಲಿನ ತತ್ವಪದಕಾರರಾದ ನೀವುಗಳೇ ನನಗೆ ನಾಗ ಸಾಧುಗಳಂತೆ ಕಾಣುತ್ತೀರಿ ಎಂದರು.
ಸಾಹಿತಿ ಬಿದಲೋಟಿ ರಂಗನಾಥ್ ಮಾತನಾಡಿ, ತತ್ವಪದಗಳು ನಮಗೆ ಯಾವಾಗಲೂ ಆಧ್ಯಾತ್ಮಿಕ ಚಿಂತನೆಯ ಬೀಜವನ್ನು ಬಿತ್ತುತ್ತಾ, ನೆಲಮೂಲ ಸಂಸ್ಕೃತಿಯ ಅರಿವನ್ನು ಬಿತ್ತುತ್ತವೆ. ಸಾಹಿತ್ಯದ ತಾಯಿಬೇರು ತತ್ವಪದ. ಅವು ನಮಗೆ ಚಿಂತನೆಗೆ ದಾರಿ ಮಾಡುತ್ತ ಬೆಳಕಿನ ದಾರಿಯನ್ನು ಹುಡುಕಲು ಅನುವು ಮಾಡಿಕೊಳ್ಳುತ್ತೇವೆ ಎಂದರು.
ಆದಿ ಜಾಂಬವ ಮಠದ ಅಧ್ಯಕ್ಷ ಶ್ರೀ ಮರಿರಂಗಯ್ಯ ಸ್ವಾಮಿಗಳು ಮಾತನಾಡಿ ನಾವು ಯಾವುದೇ ಆಸೆ ಆಕಾಂಕ್ಷೆಗಳಿಗೆ ನಿಸ್ವಾರ್ಥ ಸೇವೆಯನ್ನು ಮಾಡುತ್ತಾ ಬಂದಿದ್ದೇವೆ. ಕರ್ನಾಟಕದ ಮೂಲಮೂಲೆಯಿಂದ ಕರೆಸಿ, ತತ್ವಪದ ಮೇಳ ಮಾಡುವುದು ಒಂದು ಸವಾಲಿನ ಕೆಲಸವೇ ಸರಿ ಎಂದರು.
ತತ್ವಪದಕಾರ ಕಲ್ಲಳ್ಳಿ ರಾಮಣ್ಣ ಮಾತನಾಡಿ ಮರಿ ರಂಗಯ್ಯ ಸ್ವಾಮಿಗಳು ಮಠವನ್ನು ಮಾಡಿ ನೂರಾರು ಶರಣರನ್ನು ಕರೆಸಿ, ಗೌರವಿಸಿ ಕಳಿಸುವ ಇವರ ಶ್ರಮ ಎಂದು ಶ್ಲಾಘನೀಯ ನುಡಿದರು.
ಕಾರ್ಯಕ್ರಮದಲ್ಲಿ ಜನಧ್ವನಿ ಪತ್ರಿಕೆ ಸಂಪಾದಕ ಬಿಎಂ ಮಂಜುನಾಥ್.ಕಾರ್ತಿಕ್.ಬಿ.ಎಂ. ಉದ್ಯಮಿ ಪ್ರಮೋದ್ ಗೌಡ, ಶರಣ ತಿಮ್ಮಯ್ಯ. ಕಾಡಾರ್ಯ ಸ್ವಾಮಿ, ಸಿದ್ಧಾರೂಢ ಸ್ವಾಮಿ, ಸಿದ್ದಗಂಗಮ್ಮ ಮುಂತಾದವರು ಕಾರ್ಯಕ್ರಮದಲ್ಲಿ ಇದ್ದರು. ತತ್ವಪದಕಾರರಿಗೆ ಆದಿ ಜಾಂಬವ ಮಠದ ವತಿಯಿಂದ ವಸ್ತ್ರದಾನ ಮಾಡಲಾಯಿತು.